
Posted by : Sirajuddin Bangar
Source : NS18
1 ಕೋಟಿ ರೂ. ಹಣದ ಜತೆ ನಾಪತ್ತೆಯಾದ ಅಶೋಕ್ ವಿರುದ್ದ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಲಾಗಿದೆ. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿ ಮ್ಯಾನೇಜರ್ ರಾಜು ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು (ಮೇ 18): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಟಿಎಂಗೆ ತುಂಬ ಬೇಕಾಗಿದ್ದ 1 ಕೋಟಿ ರೂ. ಹಣದ ಸಮೇತ ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿ ನೌಕರ ಪರಾರಿಯಾಗಿರುವ ಘಟನೆ ನಡೆದಿದೆ. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿ ನೌಕರ ಅಶೋಕ್ 1 ಕೋಟಿ ರೂ.ನೊಂದಿಗೆ ಪರಾರಿಯಾಗಿದ್ದಾನೆ.
ಮೇ 14ರಂದು ಎಟಿಎಂಗಳಿಗೆ ಹಣ ತುಂಬಲು ಸೆಕ್ಯೂರ್ ವ್ಯಾಲ್ಯೂ ಸಂಸ್ಥೆ 4.5 ಕೋಟಿ ರೂ. ಹಣವನ್ನು ಡ್ರಾ ಮಾಡಬೇಕಿತ್ತು. ಹೀಗಾಗಿ, 3.5 ಕೋಟಿ ರೂ. ಹಣವನ್ನು ಡ್ರಾ ಮಾಡಿ ರಾಮು ಮತ್ತು ಶ್ರೀನಿವಾಸ್ಗೆ ಅಶೋಕ್ ಕೊಟ್ಟಿದ್ದ. ನಂತರ ಬಾಕಿ 1 ಕೋಟಿ ರೂ. ಹಣವನ್ನು ಡ್ರಾ ಮಾಡಿಕೊಂಡು ಅಶೋಕ್ ಪರಾರಿಯಾಗಿದ್ದಾನೆ. ಸೇಂಟ್ ಮಾರ್ಕ್ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ನಿಂದ ಡ್ರಾ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.
1 ಕೋಟಿ ರೂ. ಹಣದ ಜತೆ ನಾಪತ್ತೆಯಾದ ಅಶೋಕ್ ವಿರುದ್ದ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಲಾಗಿದೆ. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿ ಮ್ಯಾನೇಜರ್ ರಾಜು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಅಶೋಕ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.